ಹೊನ್ನಾವರ:-ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿನ ಘಟ್ಟ ಪ್ರದೇಶದಲ್ಲಿ 20 ನಿಮಿಷಗಳ ಕಾಲ ಗಾಳಿ ಸಹಿತ ಅಬ್ಬರದ ಮಳೆಯಿಂದಾಗಿ ಹೊನ್ನಾವರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 206 ರ ದೇವರಗದ್ದೆ ಗ್ರಾಮದ ಬಳಿ ಮರ ಬಿದ್ದು ಒಂದು ಘಂಟೆಗೂ ಹೆಚ್ಚು ಕಾಲ ಸಂಚಾರ ಸಂಪೂರ್ಣ ಬಂದ್ ಆಗಿತ್ತು.ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಹಾಗೂ ಪೊಲೀಸರು ಮರವನ್ನು ತೆರವುಗೊಳಿಸಿ ರಾಜ್ಯ ಹೆದ್ದಾರಿ ಸುಗಮವಾಗುವಂತೆ ನೋಡಿಕೊಂಡರು.


ಜಿಲ್ಲೆಯಲ್ಲಿ ಹೊನ್ನಾವರ,ಭಟ್ಕಳ,ಕುಮಟಾ ಸೇರಿದಂತೆ ಕೆಲವು ಭಾಗದಲ್ಲಿ ಇಂದು ಬಿರುಗಾಳಿ ಸಹಿತ ಮಳೆಯಾಗಿದೆ.