About Us

ಕಾಲ ಬದಲಾದಂತೆ ಸುದ್ದಿಗಳನ್ನು ತಲುಪಿಸುವ ವಾಹಕವೂ ಬದಲಾಗಿದೆ. ಇಷ್ಟುದಿನ ಹಿಂದಿನ ದಿನದ ಸುದ್ದಿ, ವಿಶೇಷತೆಗಳನ್ನು ತಿಳಿಯಲು ಒಂದು ಕಪ್ ಕಾಫಿ ಅಥವಾ ಟೀ ಹಿಡಿದುಕೊಂಡು ಪೇಪರ್ ಹಾಕುವ ಹುಡುಗನಿಗಾಗಿ ಕಾಯುತ್ತಿದ್ದೆವು. ಟಿ.ವಿ  ಬಂದ ನಂತರ ಅದರ ಮುಂದೆ ಕುಳಿತು ರಿಮೋಟ್ ಬಟನ್ ಒತ್ತಿ ಯಾವ ಚಾನಲ್‌ನಲ್ಲಿ ಏನು ಸುದ್ದಿ ಬರುತ್ತಿದೆ ಎಂದು ತಿಳಿದುಕೊಳ್ಳುವಂತಾಯಿತು.

ಈಗ ತಂತ್ರಜ್ಞಾನ ಮತ್ತಷ್ಟು ಬದಲಾಗಿದೆ. ಸುದ್ದಿ ಮಾಧ್ಯಮ ಕೈ ಬೆರಳ ತುದಿಗೇ ಬಂದು ನಿಂತಿದೆ. ಪ್ರತಿ ಕ್ಷಣದ ಸುದ್ದಿಗಳನ್ನು  ಅಂತರ್ಜಾಲದ ಮೂಲಕ ನಿಮ್ಮ ಮೊಬೈಲ್‌ನಲ್ಲಿಯೇ ಪಡೆಯಬಹುದಾಗಿದೆ. ಈ ಮಾಧ್ಯಮದ ಮೂಲಕ ನಿಮಗೆ ಸುದ್ದಿಗಳನ್ನು ತಲುಪಿಸಲು ನಾವೂ ನೆರವಾಗುತ್ತಿದ್ದೇವೆ. 

‘ಕನ್ನಡ ವಾಣಿ’ ಎಂದು ನಾಮಕರಣಗೊಂಡು ಪ್ರಾಯೋಗಿಕವಾಗಿ ಉತ್ತಮ ಜನ ಬೆಂಬಲ ಪಡೆದ ನಮ್ಮ ವೆಬ್‌ಸೈಟ್, ಈಗ ಬಾಲ್ಯದಿಂದ ಯೌವನಾವಸ್ಥೆ ತಲುಪಿದೆ. ನೈಜ ವಿಚಾರಗಳನ್ನು ನಿಮ್ಮ ಮುಂದಿಟ್ಟು ಈ ವೇದಿಕೆಯ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಲು ನಮ್ಮ ತಂಡ ಉತ್ಸುಕವಾಗಿದೆ. 

೧೫ ವರ್ಷಗಳಿಂದ ವಿವಿಧ ಪತ್ರಿಕೆಗಳು, ಟಿ.ವಿ ವಾಹಿನಿಗಳಲ್ಲಿ, ರಾಜ್ಯ, ಹೊರರಾಜ್ಯಗಳಲ್ಲಿ ಕಾರ್ಯನಿರ್ವಹಿಸಿದ ಪ್ರಬುದ್ಧ ಪತ್ರಕರ್ತರು, ಆಸಕ್ತ ಯುವ ಬರಹಗಾರರ ಕನಸಿನ ರೂಪವೇ ‘ಕನ್ನಡವಾಣಿ’. ಕರಾವಳಿಯಲ್ಲಿ ಜನಿಸಿರುವ ಈ ಕೂಸು ಕರಾವಳಿ ಕರ್ನಾಟಕದಿಂದ ಹಿಡಿದು ಮಲೆನಾಡು ಭಾಗದ ಸುದ್ದಿಗಳನ್ನು ಪ್ರಾಮಾಣಿಕವಾಗಿ ತಮಗೆ ತಲುಪಿಸುವ ಪ್ರಯತ್ನ ಮಾಡುತ್ತಿದೆ. 

–  ಟೀಮ್ ಕನ್ನಡವಾಣಿ

error: Content is protected !!