


ಬೀದರ್ :- ಗಡಿ ಜಿಲ್ಲೆ ಬೀದರ್ ನಲ್ಲಿ ಇಂದು ಕರೋನಾಕ್ಕೆ ನಾಲ್ವರ ಬಲಿಯಾಗಿದ್ದಾರೆ.
ಬಸವಕಲ್ಯಾಣ ತಾಲೂಕಿನ 70 ಹಾಗೂ 65 ವರ್ಷದ ವೃದ್ಧರು ಹಾಗೂ ಬೀದರ್ ತಾಲೂಕಿನ 58 ವರ್ಷದ ವ್ಯಕ್ತಿ ಹಾಗೂ ಹುಮ್ನಬಾದ್ ತಾಲೂಕಿನ 33 ವರ್ಷದ ಯುವಕ ಬಲಿಯಾಗಿದ್ದಾನೆ.
ತೀವ್ರ ಉಸಿರಾಟದ ಸಮಸ್ಯೆ ಹಾಗೂ ಜ್ವರದಿಂದ ಬಳಲಿ ಸಾವನ್ನಪ್ಪಿದ ನಾಲ್ವರಿಗೆ ಇಂದು ಕೊರೋನಾ ಪಾಸಿಟಿವ್ ಧೃಡವಾಗಿದೆ.
ನಾಲ್ವರ ಬಲಿಯೊಂದಿಗೆ ಇಂದು ಜಿಲ್ಲೆಯಲ್ಲಿ 82 ಜನಕ್ಕೆ ಕೊರೋನಾ ಪಾಸಿಟಿವ್ ಧೃಡವಾಗಿದ್ದು ಇಂದು ಜಿಲ್ಲೆಯಲ್ಲಿ ಕೊರೋನಾ ಸೊಂಕಿತರ ಸಂಖ್ಯೆ 4 ಸಾವಿರ ಗಡಿ ದಾಟಿದೆ.
ತಾಲೂಕುವಾರು ವಿವರ ಇಲ್ಲಿದೆ:-
ಬೀದರ್ ನಲ್ಲಿ 30, ಔರಾದ್ ನಲ್ಲಿ 22, ಬಸವಕಲ್ಯಾಣದಲ್ಲಿ 13, ಭಾಲ್ಕಿಯಲ್ಲಿ 9, ಹುಮ್ನಬಾದ್ ನಲ್ಲಿ 8 ಜನಕ್ಕೆ ಕೊರೋನಾ ಪಾಸಿಟಿವ್ ಧೃಡವಾಗಿದೆ.
ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4031ಕ್ಕೆ ಏರಿಕೆಯಾಗಿದ್ದು ಇದರಲ್ಲಿ 3146 ಜನ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದ್ದಾರೆ.
ಇನ್ನು 754 ಜನರಿಗೆ ಸೋಂಕು ಸಕ್ರಿಯವಾಗಿದ್ದು ಇಲ್ಲಿಯವರೆಗೆ 127 ಜನ ಕೊರೋನಾ ಗೆ ಬಲಿಯಾಗಿದ್ದಾರೆ.
ವರದಿ- ಪ್ರದೀಪ್ .ಜಿ. ಎಸ್.