BREAKING NEWS
Search

ಜೋಯಿಡಾ:ರಕ್ಷಿತಾರಣ್ಯದಲ್ಲಿ ಅರಣ್ಯ ಅಧಿಕಾರಿಗಳಿಂದಲೇ ಅರಣ್ಯಕ್ಕೆ ಕೊಡಲಿ ಪೆಟ್ಟು!

647

ಕಾರವಾರ:- ಅರಣ್ಯಾಧಿಕಾರಿಗಳೇ ನಿಯಮಗಳನ್ನು ಮೀರಿ ರಕ್ಷಿತಾರಣ್ಯದಲ್ಲಿ ಮರಗಳಿಗೆ ಕೊಡಲಿ ಪೆಟ್ಟು ಕೊಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ನಡೆದಿದೆ.

ಜೋಯಿಡಾದ ಹುಲಿ ಸಂರಕ್ಷಿತ ಪ್ರದೇಶವಾದ ಕುಳಗಿ-ಸಾತಖಂಡ ಅರಣ್ಯ ಪ್ರದೇಶದಲ್ಲಿ ಅರಣ್ಯ ಅಧಿಕಾರಿಗಳು ಬೃಹತ್ ಯಂತ್ರ ಬಳಸಿ ಅರಣ್ಯದಲ್ಲಿ ಜಂಗಲ್ ಸಫರಿಗೆ ರಸ್ತೆ ನಿರ್ಮಾಣ ಮಾಡುತಿದ್ದು ಇದಕ್ಕಾಗಿ ನೂರಕ್ಕೂ ಹೆಚ್ಚು ಮರಗಳನ್ನು ಕಡಿದು ಬೃಗತ್ ಯಂತ್ರಗಳನ್ನು ಬಳಸಿ ರಸ್ತೆ ನಿರ್ಮಿಸುತಿದ್ದಾರೆ.

ಕಳೆದ ಮೂರ್ನಾಲ್ಕು ದಿನಗಳಿಂದ ಈ ಕಾರ್ಯ ನಿರ್ವಿಘ್ನವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ನಡೆಸಿಕೊಂಡು ಬಂದಿದ್ದಾರೆ. ಚಿಕ್ಕ ಕಾಲ ಹಾದಿಯಿದ್ದ ರಸ್ತೆಯನ್ನು ದೊಡ್ಡದಾಗಿ ಮಾಡಲು ರಕ್ಷಿತಾರಣ್ಯದಲ್ಲಿ ಮರಗಳನ್ನು ನಿಯಮ ಮೀರಿ ಧರೆಗುರಿಳಿಸಿದ್ದಾರೆ.

ಈ ಪ್ರದೇಶ ಕಾಳಿ ಹುಲಿ ಸಂರಕ್ಷಿತ ಪ್ರದೇಶವಾಗಿದ್ದು ರಸ್ತೆ ನಿರ್ಮಾಣ,ಮರಗಳನ್ನು ಕಡಿಯಲು ನಿಯಮದ ಪ್ರಕಾರ ಯಾವುದೇ ಅವಕಾಶ ಇರುವುದಿಲ್ಲ.ಆದ್ರೆ ಅರಣ್ಯ ರಕ್ಷಣೆ ಮಾಡಬೇಕಾದವರೇ ಅರಣ್ಯವನ್ನು ನಾಶ ಮಾಡುತಿದ್ದು ಪರಿಸರ ವಾದಿಗಳ ಆಕ್ರೋಶಕ್ಕೆ ಕಾರಣವಾಗಿದ್ದು ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪರಿಸರವಾಧಿಗಳು ಆಗ್ರಹಿಸಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!