ಬೆಂಗಳೂರು: ರಾತ್ರೋರಾತ್ರಿ ಮುಖ್ಯಮಂತ್ರಿ ಯಡಿಯೂರಪ್ಪನವರು ಖಾತೆ ಹಂಚಿಕೆ ಪಟ್ಟಿಯನ್ನ ರಾಜಭವನಕ್ಕೆ ರವಾನಿಸಿದ್ದು ಪ್ರಮುಖರ ಖಾತೆಗಳು ಬದಲಾಗಲಿದೆ.
ಈ ಕಾರ್ಯದಿಂದಾಗಿ ಬಿಜೆಪಿಯಲ್ಲಿ ಅಸಮಧಾನ ಮತ್ತು ಭಿನ್ನಮತ ಸ್ಫೋಟವಾಗುವ ಸಾಧ್ಯತೆಗಳು ದಟ್ಟವಾಗಿವೆ. ಕೇವಲ ನೂತನ ಸಚಿವರಿಗೆ ಖಾತೆ ಮಾಡದೇ, ಕೆಲವರ ಖಾತೆಗಳನ್ನ ಸಿಎಂ ಅದಲು-ಬದಲು ಮಾಡಿದ್ದಾರೆ ಎಂದು ವಾಹಿನಿಯೊಂದು ವರದಿ ಮಾಡಿದೆ.
ಬದಲಾವಣೆ ಮಾಡಿದ ಪ್ರಮುಖ ಖಾತೆಗಳನ್ನ ತಮ್ಮ ಬಳಿಯೇ ಉಳಿಸಿಕೊಂಡು ಕಳುಹಿಸಿರುವ ಪಟ್ಟಿಗೆ ಇಂದು ರಾಜ್ಯಪಾಲರು ಅಂಕಿತ ಹಾಕಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಈ ಪಟ್ಟಿಯಿಂದ ಪ್ರಮುಖವಲ್ಲದ ಖಾತೆ ಸಿಕ್ಕ ಸಚಿವರಿಗೆ ನಿರಾಸೆಯುಂಟಾಗುವುದು ಬಹುತೇಕ ಖಚಿತವಾಗಿದೆ. ಸಂಪುಟದ 17 ಸಚಿವರಿಗೆ ಖಾತೆ ಪುನರ್ ಹಂಚಿಕೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಯಾರಿಗೆ ಯಾವ ಖಾತೆ, ಯಾರ ಖಾತೆಗಳು ಬದಲು ವಿವರ ಈ ಕೆಳಗಿನಂತಿದೆ.
ಆಹಾರ ಮತ್ತು ನಾಗರಿಕ ಪೂರೈಕೆ.
ಈಗ – ಉಮೇಶ್ ಕತ್ತಿ,
ಮೊದಲು – ಗೋಪಾಲಯ್ಯ
ಗೃಹ, ಕಾನೂನು, ಸಂಸದೀಯ ವ್ಯವಹಾರ.
ಈಗ – ಬಸವರಾಜ ಬೊಮ್ಮಾಯಿ,
ಮೊದಲು – ಮಾಧುಸ್ವಾಮಿ
ಕನ್ನಡ ಮತ್ತು ಸಂಸ್ಕೃತಿ.
ಈಗ – ಮಾಧುಸ್ವಾಮಿ,
ಮೊದಲು – ಯಡಿಯೂರಪ್ಪ (ಸಿಟಿ ರವಿ ರಾಜೀನಾಮೆ ಬಳಿಕ ಸಿಎಂ ಬಳಿಯೇ ಇತ್ತು)
ವೈದ್ಯಕೀಯ ಶಿಕ್ಷಣ.
ಈಗ – ಮಾಧುಸ್ವಾಮಿ,
ಮೊದಲು – ಸುಧಾಕರ್
ಸಣ್ಣ ಕೈಗಾರಿಕೆ ಮತ್ತು ವಾರ್ತಾ ಇಲಾಖೆ.
ಈಗ – ಸಿಸಿ ಪಾಟೀಲ್,
ಮೊದಲು – ಯಡಿಯೂರಪ್ಪ (ಹೆಚ್ಚುವರಿಯಾಗಿತ್ತು)
ಅರಣ್ಯ ಖಾತೆ.
ಈಗ – ಅರವಿಂದ ಲಿಂಬಾವಳಿ,
ಮೊದಲು – ಆನಂದ್ ಸಿಂಗ್
ಗಣಿ, ಭೂ ವಿಜ್ಞಾನ.
ಈಗ – ಮುರುಗೇಶ ನಿರಾಣಿ
ಮೊದಲು – ಸಿಸಿ ಪಾಟೀಲ್
ಅಬಕಾರಿ.
ಈಗ – ಎಂಟಿಬಿ ನಾಗರಾಜ್.
ಮೊದಲು – ನಾಗೇಶ್
ಸಣ್ಣ ನೀರಾವರಿ.
ಈಗ – ಸಿಪಿ ಯೋಗೇಶ್ವರ್,
ಮೊದಲು – ಮಾಧುಸ್ವಾಮಿ
ಪ್ರವಾಸೋದ್ಯಮ.
ಈಗ – ಆನಂದಸಿಂಗ್,
ಮೊದಲು – ಯಡಿಯೂರಪ್ಪ (ಸಿಟಿ ರವಿ ರಾಜೀನಾಮೆ ಬಳಿಕ ಸಿಎಂ ಬಳಿಯೇ ಇತ್ತು)
ಪೌರಾಡಳಿತ, ರೇಷ್ಮೆ.
ಈಗ – ಆರ್ ಶಂಕರ್,
ಮೊದಲು – ನಾರಾಯಣಗೌಡ
ತೋಟಗಾರಿಕೆ/ ಸಕ್ಕರೆ
ಈಗ – ಗೋಪಾಲಯ್ಯ,
ಮೊದಲು – ನಾರಾಯಣಗೌಡ/ ಶಿವರಾಮ್ ಹೆಬ್ಬಾರ್.
ಯುವಜನ ಸೇವೆ ಮತ್ತು ಕ್ರೀಡೆ, ವಕ್ಫ್, ಹಜ್( ವಕ್ಫ್, ಹಜ್ ಶ್ರೀಮಂತ ಪಾಟೀಲ್ ಬಳಿ ಇತ್ತು)
ಈಗ – ನಾರಾಯಣಗೌಡ,
ಮೊದಲು – ಯಡಿಯೂರಪ್ಪ (ಸಿಟಿ ರವಿ ರಾಜೀನಾಮೆ ಬಳಿಕ ಸಿಎಂ ಬಳಿಯೇ ಇತ್ತು)
ಮೀನುಗಾರಿಕೆ ಮತ್ತು ಬಂದರು
ಈಗ – ಎಸ್ ಅಂಗಾರ,
ಮೊದಲು – ಕೋಟಾ ಶ್ರೀನಿವಾಸ್ ಪೂಜಾರಿ
ಹಿಂದುಳಿದ ವರ್ಗಗಳ ಕಲ್ಯಾಣ.
ಈಗ – ಕೋಟಾ ಶ್ರೀನಿವಾಸ ಪೂಜಾರಿ (ಮುಜುರಾಯಿ ಖಾತೆ ಇರಲಿದೆ)
ಮೊದಲು – ಯಡಿಯೂರಪ್ಪ.