ಬೆಂಗಳೂರು: ರಾಜ್ಯದಲ್ಲಿ ಚುನಾವಣೆ ನಡೆಯಲಿರುವ ಒಟ್ಟು 25 ವಿಧಾನ ಪರಿಷತ್ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಬಿಜೆಪಿಯು ಶುಕ್ರವಾರ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.
ಯಾವ ಜಿಲ್ಲೆಗೆ ಯಾರು ಅಭ್ಯರ್ಥಿ ವಿವರ ನೋಡಿ:-
ಶಿವಮೊಗ್ಗ ಜಿಲ್ಲೆಗೆ
ಬಹುನಿರೀಕ್ಷೆ ಇದ್ದ ಮಾಜಿ ಸಭಾಪತಿ ಡಿ.ಹೆಚ್.ಶಂಕರ್ ಮೂರ್ತಿ ಅವರ ಪುತ್ರ ಹಾಗೂ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್ ಅರುಣ್ ಅವರ ಹೆಸರನ್ನ ಪ್ರಕಟಿಸಿದೆ.
ಮಹಾರಷ್ಟ್ರದ 5 ಕ್ಷೇತ್ರಗಳ ಮತ್ತು ಕರ್ನಾಟಕದ 20 ಕ್ಷೇತ್ರಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರನ್ನ ಫೈನಲ್ ಮಾಡಲಾಗಿದೆ. ಕೊಡಗಿನಲ್ಲಿ ಸುಜಾ ಕುಶಾಲಪ್ಪ, ದ.ಕ ಜಿಲ್ಲೆಯಿಂದ ಕೋಟಾ ಶ್ರೀನಿವಾಸ ಪೂಜಾರಿ, ಚಿಕ್ಕಮಗಳೂರಿನಲ್ಲಿ ಎಂಕೆ ಪ್ರಾಣೇಶ್,
ಶಿವಮೊಗ್ಗದಲ್ಲಿ ಡಿಎಸ್ ಅರುಣ್, ಧಾರವಾಡ ಪ್ರದೀಪ್
ಶೆಟ್ಟರ್, ಬೆಳಗಾವಿ ಮಹತೇಶ್ ಕವಟಗಿಮಠ, ಗುಲ್ಬರ್ಗ -ಬಿ.ಜಿ ಪಾಟೀಲ್, ಚಿತ್ರದುರ್ಗ -ಕೆ.ಎಸ್. ನವೀನ್, ಮೈಸೂರು -ರಘು ಕೌಟಿಲ್ಯ, ಹಾಸನ ವಿಶ್ವನಾಥ್, ಉತ್ತರ ಕನ್ನಡ ಜಿಲ್ಲೆಗೆ ಕಾರವಾರದ ಗಣಪತಿ ಉಳ್ವೇಕರ್ ರವರನ್ನು ಕಣಕ್ಕೆ ಇಳಿಸಿದೆ.