ಕಾರವಾರ :- ಕರ್ನಾಟಕದ ಒಂದಿಂಚು ಜಾಗ ಕೂಡ ನಾವು ಕೊಡಲ್ಲ,ಮಹಾರಾಷ್ಟ್ರಕ್ಕೆ ಯಾರೂ ಸೇರೋಲ್ಲ,ಅವರು ಎಷ್ಟಾದ್ರೂ ಬಾಯಿ ಬಡಿದುಕೊಳ್ಳಿ ಎಂದು ಉದ್ದವ್ ಠಾಕ್ರೆ ಟ್ವೀಟ್ ವಿಚಾರ ಹಿನ್ನಲೆಯಲ್ಲಿ ಕಾರವಾರದಲ್ಲಿ ಪಶುಸಂಗೋಪನ ಸಚಿವ ಪ್ರಭು ಚಹ್ವಾಣ್ ಹೇಳಿದರು.
ಸಚಿವರ ಮಾತಿನ ವೀಡಿಯೋ ನೋಡಿ:-
ಇಂದು ಕಾರವಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು
ಕರ್ನಾಟಕದ ಒಂದಿಂಚು ಜಾಗ ಕೂಡ ನಾವು ಕೊಡಲ್ಲ.ಮಹಾರಾಷ್ಟ್ರಕ್ಕೆ ಯಾರೂ ಸೇರೋಲ್ಲ
ಅವರು ಎಷ್ಟಾದ್ರೂ ಬೊಬ್ಬೆ ಹೊಡೆಯಲಿ, ಉದ್ದವ್ ಠಾಕ್ರೆಗೆ ಮಾಡಲು ಬೇರೆ ಕೆಲಸವಿಲ್ಲ.
ಹಾಗಾಗಿ ಪದೇ ಪದೇ ಇಂತಾ ಹೇಳಿಕೆ ನೀಡಿ ರಾಜಕೀಯ ಮಾಡ್ತಿದ್ದಾರೆ.ಅವರ ಹೇಳಿಕೆಯನ್ನ ನಾವು ಸುತರಾಮ್ ಒಪ್ಪಲ್ಲಅವರು ಎಷ್ಟಾದರೂ ಬಾಯಿ ಬಡಿದುಕೊಳ್ಳಲಿ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿಗೆ ತಿರುಗೇಟು ನೀಡಿದರು.