ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ನಕಲಿ ನೋಟಿನ ಜಾಲ ವಿಸ್ತಾರವಾಗಿದ್ದು ಸದ್ಯ ಜಿಲ್ಲೆಯ ಪೊಲೀಸರು ತುಂಬಾ ಯಾಕ್ಟಿವ್ ಆದ್ದರಿಂದ ನಾಲ್ಕು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರು ಆರೋಪಿ ಮುಸ್ತಾಕ್ ಹಸನ್ ಬೇಗ್, ಪ್ರವೀಣ, ಲೋಯ್ಡಾ, ಲಾಸ್೯ನ್ ಲೂಯಿಸ್, ಪ್ರನೋಯ್ ಪರ್ನಾಂಡಿಸ್.ಈ ಐವರೇ
ನಕಲಿ ನೋಟಿನ ಜಾಲದಲ್ಲಿ ಸಿಕ್ಕಿಬಿದ್ದವರು, ಇವರಲ್ಲಿ ಮುಸ್ತಾಕ ತೆಲೆಮರಿಸಿಕೊಂಡಿದ್ದಾನೆ.
ಎಲ್ಲಿ ಚಲಾವಣೆಯಾಗುತಿತ್ತು ನಕಲಿ ನೋಟು?
ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನಲ್ಲಿ ಕೋಟಾ ನೋಟಿನ ದಂದೆ ಸಕತ್ ಆಕ್ಟಿವ್ ಆಗಿತ್ತು. ಸಣ್ಣ ಪುಟ್ಟ ವ್ಯಾಪಾರಸ್ಥರನ್ನ ಟಾರ್ಗೆಟ್ ಮಾಡಿ ಸೈಲೆಂಟ್ ಆಗಿ ಕೋಟಾ ನೋಟುಕೊಟ್ಟು ವಂಚಿಸುತಿದ್ದ ಆರೋಪಿಗಳು ಟಾರ್ಗೆಟ್ ಮಾಡುತಿದ್ದದ್ದು ಪ್ರವಾಸಿ ಸ್ಥಳಗಳು, ವ್ಯಾಪಾರ ನಡೆಯುತಿದ್ದ ಸ್ಥಳಗಳನ್ನ.
ಜಿಲ್ಲೆಯ ಗೋಕರ್ಣ,ಕುಮಟಾ,ಅಂಕೊಲ,ಕಾರವಾರ ಭಾಗದಲ್ಲಿ ಈ ನಕಲಿ ನೊಟುಗಳನ್ನು ವ್ಯಾಪಾರ ನಡೆಯುವ ಸ್ಥಳಗಳಲ್ಲಿ ಇವರು ಅಸಲಿ ನೋಟಿನ ಜೊತೆ ಸೇರಿಸಿ ಕೊಡುತಿದ್ದರು.
ಈ ಹಿಂದೆ ಗೋಕರ್ಣದಲ್ಲಿ ಹಲವು ವ್ಯಾಪಾರಿಗಳಿಗೆ 500 ಮುಖಬೆಲೆಯ ನೋಟುಗಳು ಸಿಕ್ಕು ಪಚೀತಿ ಅನುಭವಿಸಿದ್ದರು. ಇದಲ್ಲದೇ ಅಂಕೊಲ,ಕುಮಟಾ ಭಾಗದ ವ್ಯವಹಾರ ನಡೆಯುವ ಸ್ಥಳಗಳಲ್ಲಿ ಇವರು ಈ ನಕಲಿ ನೋಟನ್ನು ಚಲಾವಣೆ ಮಾಡಿದ್ದಾರೆ.
ಇನ್ನೂ ಈ ನಕಲಿ ನೋಟಿನ ದಂದೆ ಕೇವಲ ಸಣ್ಣಪುಟ್ಟ ವ್ಯಾಪಾರಸ್ಥರನ್ನ ಅಷ್ಟೇ ಟಾರ್ಗೆಟ್ ಮಾಡುತ್ತಿರಲಿಲ್ಲ, ಪರಿಚಯಸ್ಥರಿಗೆ 25000 ಕೋಟಾ ನೋಟನ್ನ ಕೊಟ್ಟು ಅವರಿಂದ 5000 ಅಸಲಿ ನೋಟನ್ನ ಪಡೆದುಕೊಳ್ಳುತ್ತಿದ್ರಂತೆ. ಜೊತೆಗೆ 500 ಕ್ಕೆ 10% ಕಮಿಷನ್ ಪಡೆದುಕೊಂಡು ತನ್ನ ವ್ಯವಹಾರದ ಕದಂಬ ಬಾಹುವನ್ನ ಚಾಚುತ್ತಾ ಬಂದಿದ್ದಾರೆ .
ಇನ್ನೂ ಈ ಕೋಟಾ ನೋಟು ಬಹುತೇಕ ಗೋವಾ ಮೂಲದಿಂದ ಬಂದಿರುವ ಶಂಕೆಯನ್ನ ಪೊಲೀಸ್ ಅಧಿಕಾರಿಗಳ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣ ಪ್ರಾಥಮಿಕ ಹಂತದಲ್ಲಿ ಈ ವ್ಯವಹಾರದಲ್ಲಿ ಕೇವಲ ನಾಲ್ಕು ಜನರ ಬಂಧನವಾಗಿದೆ ಆದರೆ,ಈ ಜಾಲದ ಕಿಂಗ್ ಪಿನ್ಗಾಗಿ ಪೋಲಿಸ್ ಇಲಾಖೆ ಹುಡುಕಾಟನಡೆಸಿದೆ. ಆದರೇ ಈ ಹಿಂದೆ ಇವರು ಚಲಾವಣೆ ಮಾಡಿದ ಕೋಟನೋಟುಗಳು ಇನ್ನೂ ಚಲಾವಣೆಯಾಗುತಿದ್ದು ವ್ಯಾಪಾರಸ್ತರು,ಗ್ರಾಹಕರು ಹಣದ ವ್ಯವಹಾರ ಮಾಡುವಾಗ ಎಚ್ಚರಿಕೆಯಿಂದ ನೋಡದಿದ್ದರೇ ತೊಂದರೆ ಅನುಭವಿಸುವುದು ಕಟ್ಟಿಟ್ಟ ಬುತ್ತಿ.