ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಎನ್ನಲಾದ ಹುಲಿಯೊಂದು ತನ್ನ ಮೂರು ಮರಿಗಳೊಂದಿಗೆ ವಾಹನದ ಬೆಳಕಿಗೆ ಪ್ರತ್ಯಕ್ಷವಾಗಿರುವ ವೀಡಿಯೋ ಜಿಲ್ಲೆಯಾಧ್ಯಾಂತ ವೈರಲ್ ಆಗಿದೆ.ಈ ವೀಡಿಯೋ ಮುಂಡಗೋಡು ತಾಲೂಕಿನ ರಾಮಪುರ ರಸ್ತೆ ಅರಣ್ಯದಲ್ಲಿ ಸನಿಹ ಕಂಡದ್ದು ಎಂದು ಹಲವರು ಪೋಸ್ಟ್ ಮಾಡಿದ್ದರು. ಇದು ಸಾಮಾಜಿಕ ಜಾಲತಾಣದ ಜೊತೆಗೆ ಮುಂಡಗೋಡು ಭಾಗದ ಕೆಲವು ಪತ್ರಕರ್ತರು ಸಹ ಪೂರ್ವಪರ ಯೋಚಿಸದೇ ಸುದ್ದಿಗೆ ಬಣ್ಣ ಕಟ್ಟಿ ಮುಂಡಗೋಡಿನದ್ದು ಎಂದು ಸುದ್ದಿ ಸಹ ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದರು.
ಅಸಲಿಯತ್ತು ಏನೆಂದರೆ ಈ ವೀಡಿಯೋ ನಮ್ಮ ರಾಜ್ಯದ್ದೇ ಅಲ್ಲ.ಇದು ಉತ್ತರ ಪ್ರದೇಶದ ದುಧವಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಂಡ ದೃಶ್ಯವಿದು.ರಮೇಶ್ ಪಾಂಡೆ ಎಂಬ ಅಲ್ಲಿನ ಅರಣ್ಯಾಧಿಕಾರಿಯೊಬ್ಬರು ಹಿಂದಿನ ಅರಣ್ಯ ಸಚಿವ ಜಯರಾಮ್ ರಮೇಶ್ ರವರಿಗೆ ಟ್ವೀಟ್ ನಲ್ಲಿ ಷೇರ್ ಮಾಡಿದ್ದಾಗಿದೆ.
ಇನ್ನು ಕಾತೂರು ಸೇರಿದಂತೆ ಮುಂಡಗೋಡಿನ ಯಾವ ಭಾಗದಲ್ಲಿ ಮರಿ ಹೊಂದಿದ ಹುಲಿಗಳು ಪತ್ತೆಯಾಗಿಲ್ಲ ಎಂದು ಅರಣ್ಯಾಧಿಕಾರುಗಳು ಮಾಹಿತಿ ನೀಡಿದ್ದಾರೆ. ಹೀಗಾಗಿ ಜನರು ಹೆದರುವ ಅವಷ್ಯಕತೆ ಇಲ್ಲ ಎಂದಿದ್ದಾರೆ.