ಶಿವಮೊಗ್ಗ :-ನಗರದಲ್ಲಿ ಜಾರಿಗೊಂಡಿದ್ದ ಸೆಕ್ಷನ್ 144 ಇಂದಿಗೆ ಕೊನೆಗೊಂಡಿದೆ. ಈ ಕುರಿತು ತಹಶೀಲ್ದಾರ್ ನಾಗರಾಜ್ ಎನ್.ಜೆ ಸ್ಪಷ್ಟಪಡಿಸಿದ್ದು ಪೊಲೀಸ್ ಇಲಾಖೆ ಯಿಂದ 144 ಸೆಕ್ಷನ್ ಮುಂದುವರಿಕೆ ಕುರುತು ಯಾವುದೇ ಪತ್ರ ಬಾರದ ಹಿನ್ನಲೆಯಲ್ಲಿ 144 ಸೆಕ್ಷನ್ ಇಂದಿಗೆ ಮುಗಿದಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಡಿ.3 ರಂದು ಬಜರಂಗದಳದ ಕಾರ್ಯಕರ್ತ ನಾಗೇಶ್ ಗೌಡನ ಮೇಲೆ ನಡೆದ ಹಲ್ಲೆಯಿಂದ ಆರಂಭಗೊಂಡ ಸೆಕ್ಷನ್ 144 ನಗರದ ಜನರನ್ನು ಕತ್ತಲೆಗೆ ನೂಕಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ವ್ಯಕ್ತಿಗಳನ್ನ ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ 11 ದಿನಗಳ ಕಾಲ ಜಾರಿಗೊಂಡಿದ್ದ ನಿಷೇದಾಜ್ಞೆ ಇಂದು ಕೊನೆಗೊಳ್ಳುವ ಮೂಲಕ ಜನರಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.