ಶಿವಮೊಗ್ಗ/ಬೀದರ್ :- ಶಿವಮೊಗ್ಗ ಮತ್ತು ಬೀದರ್ ನಲ್ಲಿ ಬಂದ್ ಗೆ ಸಂಪೂರ್ಣ ಬೆಂಬಲ ನೀಡಿಲ್ಲ.ಹೀಗಾಗಿ ಬಂದ್ ಆಗುವ ಸಾಧ್ಯತೆಗಳು ಕಮ್ಮಿ ಇದೆ.
ಶಿವಮೊಗ್ಗ ದಲ್ಲಿ ಹೇಗೆ?
ಶಿವಮೊಗ್ಗ ಜಿಲ್ಲೆಯಲ್ಲಿ ಬಂದ್ ಗೆ ಪೂರ್ಣ ಪ್ರಮಾಣದ ಬೆಂಬಲ ನೀಡಿಲ್ಲ ಹೀಗಾಗಿ ಕನ್ನಡ ಸಂಘಟನೆಗಳು ತಾಲೂಕು ವಾರು ಪ್ರತಿಭಟನೆ ಹಾಗೂ ಮನವಿಗೆ ಸೀಮಿತವಾಗಲಿದೆ. ಶಿವಮೊಗ್ಗ ನಗರದಲ್ಲಿ ಕೋಮು ಗಲಭೆ ಹಿನ್ನಲೆಯಲ್ಲಿ ನಿಷೃಧಾಜ್ಞೆ ಜಾರಿ ಇದ್ದು ಇಲ್ಲಿ ಈಗಾಗಲೇ ನಗರ ಸ್ಥಬ್ಧವಾಗಿದೆ.
ಸಂಚಾರವ್ಯವಸ್ಥೆ.
ಜಿಲ್ಲೆಯಲ್ಲಿ ಶಿವಮೊಗ್ಗ ನಗರಕ್ಕೆ ಹೊರತುಪಡಿಸಿ ಉಳಿದಕಡೆ ಎಂದಿನಂತೆ ಇರಲಿದೆ. ಬೆಂಗಳೂರು ಸೇರಿದಂತೆ ಎಲ್ಲಾ ಭಾಗಗಳಿಗೆ ಖಾಸಗಿ,ಸರ್ಕಾರಿ ಬಸ್ ತೆರಳಲಿದೆ. ಅಂಗಡಿಮುಂಗಟ್ಟುಗಳು ತೆರೆದಿರಲಿದೆ.
ಬೀದರ್
ಬೀದರ್ ನಲ್ಲಿ ಕನ್ನಡ ಸಂಘಟನೆ ಪ್ರತಿಭಟನೆಗಷ್ಟೇ ಸೀಮಿತವಿದೆ. ಹೀಗಾಗಿ ಪ್ರತಿಭಟನೆ ಕಾವು ಹೆಚ್ಚಾದಲ್ಲಿ ಮಾತ್ರ ಅಂಗಡಿ ಮುಂಗಟ್ಟುಗಳು ಬಂದ್ ಆಗಲಿದ್ದು ಪರಿಸ್ಥಿತಿಗೆವತಕ್ಕಂತೆ ಬಂದ್ ಆಗುವ ಸಾಧ್ಯತೆಗಳಿವೆ.
ಸಂಚಾರ ವ್ಯವಸ್ಥೆ.
ನಾಳೆ ಸಾರಿಗೆ ವ್ಯವಸ್ತೆ ಎಂದಿನಂತೆ ಇರಲಿದೆ,ಅಂಗಡಿ ಮುಂಗಟ್ಟುಗಳು ಸಹ ತೆರೆಯಲಿದ್ದು ಸಹಜ ಸ್ಥಿತಿ ಇರಲಿದೆ.