ಭಟ್ಕಳ:-ಮುಂಡಳ್ಳಿಯ ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ದೇವರ ಆಭರಣ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓಡಿಹೋಗಿದ್ದ ಅರ್ಚಕನನ್ನು ಸಾಗರದಲ್ಲಿ ಬಂಧಿಸಿದ್ದಾರೆ.
ಪ್ರಕರಣವನ್ನ ಬೇಧಿಸಲು ಎಎಸ್ಪಿ ನಿಖಿಲ್ ಮಾರ್ಗದರ್ಶನದಲ್ಲಿ ತಂಡವನ್ನ ರಚಿಸಲಾಗಿತ್ತು. ಪೊಲೀಸರ ವಿವಿಧ ತಂಡ ಯಲ್ಲಾಪುರ, ಮೈಸೂರು, ಬೆಂಗಳೂರು ಹೀಗೆ ಆರೋಪಿ ಪತ್ತೆಗಾಗಿ ಜಾಲ ಬೀಸಲಾಗಿತ್ತು. ಆರೋಪಿ ಪೊಲೀಸರಿಂದ ತಪ್ಪಿಸಲು ಊರೂರು ಬದಲಾಯಿಸುತ್ತಿದ್ದ ಕೊನೆಗೂ ಪೊಲೀಸರ ಶ್ರಮದಿಂದ
ಅಂತೂ ಸಾಗರದಲ್ಲಿ ಈ ಹಿಂದೆ ಸಹಾಯಕ ಅರ್ಚಕರಾಗಿ ಕೆಲಸ ಮಾಡುತ್ತಿದ್ದ ಸತೀಶ ಭಟ್ ಎಂಬಾತನನ್ನ ವಶಕ್ಕೆ ಪಡೆಯಲಾಗಿದ್ದು ತನಿಖೆ ನಡೆಸಲಾಗಿದೆ. ದೇವರ ಬಂಗಾರವನ್ನ ಏಲ್ಲಿ ಇಡಲಾಗಿದೆ ಎಂಬುದರ ಬಗ್ಗೆ ಪೊಲೀಸರ ತನಿಖೆ ಮುಂದುವರೆಸಿದ್ದಾರೆ.