BREAKING NEWS
Search

ಭಟ್ಕಳ-ಮನೆಯ ಚಾವಣಿ ಕಿತ್ತು ಚಿನ್ನಾಭರಣ,ನಗದು ದೋಚಿದ ಕಳ್ಳರು.

2793

ಕಾರವಾರ : ಮನೆಯ ಹಿಂಬದಿಯ ಚಾವಣೆಯ ಹಂಚು ಕಿತ್ತು ಒಳನುಗ್ಗಿದ ಕಳ್ಳರು ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಕಾಯ್ಕಿಣಿ ಮಠದಹಿತ್ಲುವಿನಲ್ಲಿ ನಡೆದಿದೆ.

ದುರ್ಗಮ್ಮ ಮೋಗೇರ ಎನ್ನುವವರ ಮನೆಯಲ್ಲಿ ಕಳ್ಳತನವಾಗಿದ್ದು, ಮನೆ ಹಿಂಬದಿಯ ಚಾವಣಿಯ ಹಂಚು ಕಿತ್ತು ಕೋಣೆಯ ಒಳನುಗ್ಗಿದ ಕಳ್ಳರು ಕಪಾಟಿನ ಕೀಲಿ ಬಳಸಿ 2 ಲಕ್ಷ್ಮಿಸರ, 4 ಉಂಗುರ, 1ಚೈನ್, ₹25,000 ನಗದು, 2 ಪಾನ್ ಕಾರ್ಡ್, 2 ಆಧಾರ್ ಕಾರ್ಡ್ 3 ಎಟಿಎಮ್ ಕಾರ್ಡ್, ಚಾಲನಾ ಪ್ರಮಾಣ ಪತ್ರ ಮತ್ತು ಬೈಕ್ ದಾಖಲಾತಿಗಳನ್ನ ದೋಚಿ ಪರಾರಿಯಾಗಿದ್ದಾರೆ.
ಘಟನೆ ಸಂಬಂಧ ಮುಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!