ಕಾರವಾರ:- ಬ್ಯಾಂಕ್ ನಲ್ಲಿ ಸಿಬ್ಬಂದಿಯಿಂದಲೇ ಹಣ ಲಪಟಾಯಿಸಿದ ಪ್ರಕರಣ ದಲ್ಲಿ ಆರೋಪಿಯನ್ನ ಬಂಧಿಸಿಸುವಲ್ಲಿ ಯಲ್ಲಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಯಲ್ಲಾಪುರದ ಬ್ಯಾಂಕ್ ಆಫ್ ಬರೋಡದಲ್ಲಿನ ಶಾಖೆಯಲ್ಲಿ ಬ್ಯಾಂಕಿನ ಅಸಿಸ್ಟೆಂಟ್ ಮ್ಯಾನೇಜರ್ ಕುಮಾರ್ ಬೋನಾಲ ಎಂಬಾತ ಸಿಬ್ಬಂದಿಯ ಲಾಗಿನ್ ಬಳಸಿ 2.69 ಕೋಟಿ ಲಪಟಾಯಿಸಿ ಪರಾರಿಯಾಗಿದ್ದನು.
ಇದೀಗ ಯಲ್ಲಾಪುರ ಪೊಲೀಸರು ಆರೋಪಿಯನ್ನು
ಹುಬ್ಬಳ್ಳಿಯಲ್ಲಿ ವಶಕ್ಕೆ ಪಡೆದಿದ್ದಾರೆ. ತನಿಖೆ ವೇಳೆ ಬ್ಯಾಂಕ್ ನಿಂದ ವಂಚಿಸಿದ ಹಣವನ್ನ ಆನ್ ಲೈನ್ ಗೇಮ್ ಆಡಿ ಕಳೆದುಕೊಂಡಿರುವುದಾಗಿ ಮ್ಯಾನೇಜರ್ ತಿಳಿಸಿದ್ದು ತನಿಖೆ ಮುಂದುವರೆದಿದೆ.